ಪ್ರತಿಷ್ಠಿತ ರಿಲಯನ್ಸ್ ಕಂಪನಿ ಮೊದಲ ಬಾರಿಗೆ ಕನ್ನಡ ಸಿನಿಮಾ ವಿತರಣೆ ಮಾಡುತ್ತಿರುವ ಮಕ್ಕಳ ಸಿನಿಮಾ ‘ಕನಸು’....ಕಣ್ಣು ತೆರೆದಾಗ ಈ ವಾರ ರಾಜ್ಯಾದ್ಯಂತ ತೆರೆಯಮೇಲೆ ಬರುತ್ತಿದೆ.
ಸಾಮಾಜಿಕ ಪ್ರಜ್ಞೆ ಜೊತೆ, ಪರಿಸರ ಜ್ಞಾನ, ಸ್ವಚ್ಛತೆ, ಒಗ್ಗಟ್ಟು ವೃದ್ದಿಸುವ ಈ ‘ಕನಸು’ ಕಣ್ಣು ತೆರೆದಾಗ ಇಮಾಜಿನೇಶನ್ ಮೂವೀಸ್ ಅಡಿಯಲ್ಲಿ ಗಾನಸಿರಿ ಕಿರಣ್ ಕುಮಾರ್ ಹಾಗೂ ತಮ್ಮಣ್ಣ ಶೆಟ್ಟಿ ನಿರ್ಮಾಣ ಮಾಡಿರುವ ಚಿತ್ರ 120 ದಿವಸಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಹಿಂದಿ ಸಿನಿಮಾ ಜೋಧಾ ಅಕ್ಬರ್ ಸಿನಿಮಾಕ್ಕೆ ಕಲಾ ನಿರ್ದೇಶಕ ಆದ ಸಂತೋಷ್ ಶೆಟ್ಟಿ ಕಟೀಲು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಸಹಾಯಕ ನಿರ್ದೇಶಕರಾಗಿ ನಾಗೇಶ್, ಸಚಿನ್ ಎಸ್ ಶೆಟ್ಟಿ ಛಾಯಾಗ್ರಹಣ, ಯಶ್ವಂತ್ ಸಂಗೀತ, ರಜಾಕ್ ಅವರ ಗೀತ ಸಾಹಿತ್ಯ ಹಾಗೂ ಸಂಭಾಷಣೆ, ಪ್ರದೀಪ್ ರಾಯ್ ಕಲಾ ನಿರ್ದೇಶನ, ರವಿರಾಜ್ ಗಾರ್ನಿ ಅವರ ಸಂಕಲನ ಈ ‘ಕನಸು’ ಚಿತ್ರಕ್ಕೆ ಒದಗಿಸಿದ್ದಾರೆ.
ಗಗನ್, ಸಿರಿ, ಕಿರಣ್ ಕುಮಾರ್, ತಮಣ್ಣ ಶೆಟ್ಟಿ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.